shashwatsuport@gmail.com +91 7000072109 B-75, Krishna Vihar, Koni, Bilaspur, C.G 495001
Mon - Sat 10:00 AM to 5:00 PM
Book Image
Book Image
Book Image
ISBN : 978-93-93557-97-1
Category : Fiction
Catalogue : Novel
ID : SB20245

Badidha Sundara Hugalu

NA

MANASA VEENA

Paperback
400.00
e Book
199.00
Pages : 263
Language : Kannada
PAPERBACK Price : 400.00

About author : ಮಾನಸ ವೀಣಾ ಮಾನಸವೀಣಾ M.com ಪಧವೀಧರೆ. ತಾಯಿ ಸುಶೀಲಮ್ಮ ತಂದೆ ಸುಂದರೇಶನ್. ಇವರೇ ಮೊದಲ ಮಗಳು ತಮ್ಮನ ಸಂಸಾರ ಬೆಂಗಳೂರಿನಲ್ಲಿ ಇದೆ. ತಂಗಿ ಸಂಸಾರ ಆಮೇರಿಕಾದಲ್ಲಿ ವಾಸವಾಗಿದ್ದಾರೆ.ತಾಯಿ ದೈವಾಧೀನರಾಗಿದ್ದಾರೆ.ಬೆಂಗಳೂರಿನಲ್ಲಿ ಹುಟ್ಟಿ ˌ ಬೆಳೆದು ಮದುವೆಯಾಗಿ ಗಂಡನೊಡನೆ ತಮಿಳುನಾಡಿನ ತಿರುನಲ್ ವೇಲಿ ಎಂಬ ಊರಿನಲ್ಲಿ ವಾಸವಾಗಿದ್ದಾರೆ. ಇವರ ಕಥೆಗೆ ಸದಾಕಾಲ ಪ್ರೋತ್ಸಾಹˌ ಬೆಂಬಲ ನೀಡುತ್ತಾ ಬಂದಿರುವ ಗಂಡ ಶ್ರೀಧರ್ ಆಲಿಯಾಸ್ ಕೄಷ್ಣನ್ (Sridhar Alias Krishnan)ಸರಕಾರಿ ಉಧ್ಯೋಗಿ . ಮಾನಸವೀಣಾರವರು ಮದುವೆಗೆ ಮುಂಚೆ ಬೆಂಗಳೂರಿನ ಬ್ರೀಗೇಡ್ ರೋಡ್ ಕ್ರಾಸ್ ನಲ್ಲಿರುವ ರೆಸ್ಟ್ ಹೌಸ್ ರೋಡ್ ನಲ್ಲಿ Placement Service ನಡೆಸಿದ್ದಾರೆ. ಕೆಲಸ ಇಲ್ಲದ ಅನೇಕರಿಗೆ ಕೆಲಸ ಕೊಡಿಸಿದ್ದಾರೆ. ನಂತರ ಬೆಂಗಳೂರಿನ Church Street ನಲ್ಲಿ Placement Service ಜೊತೆಗೆ Training Centre ಶುರು ಮಾಡಿ ಅನೇಕರಿಗೆ ಕಂಪ್ಯೊಟರ್ ತರಬೇತಿ, ಟೈಪಿಂಗ್ ತರಬೇತಿಗಳನ್ನು ನೀಡಿದ್ದಾರೆ. ಆಗಿನ ಬೆಂಗಳೂರು ದೂರದರ್ಶನದಲ್ಲಿ ಹಲವು ಕಾರ್ಯಕ್ರಮಗಳಲ್ಲಿ Compearer ಆಗಿ ಕೆಲಸ ಮಾಡುವುದು ಹಾಗೂ ಬೆಂಗಳೂರಿನ All India Radioದಲ್ಲಿ ಕೂಡ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಡುವುದು ಇವರ ಹವ್ಯಾಸಗಳು.ಮದುವೆ ನಂತರ ತಿರುನಲ್ ವೇಲಿಯ ಶಾಲೆಯೊಂದರಲ್ಲಿ Spoken English Teacher ಆಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಮದುವೆಗೆ ಮುಂಚೆ ಕಥೆ ˌ ಕಾದಂಬರಿ ಓದುವ ಹವ್ಯಾಸ ಹಾಗೆ ಅವರ ಮನದಲ್ಲಿ ಬಂದ ವಿಷಯವನ್ನ ಕಥೆಯ ರೂಪದಲ್ಲಿ ಬರೆಯಲು ಯೋಚಿಸಿ ಬಿಡುವಿನ ಕಾಲದಲ್ಲಿ ಪ್ರಯತ್ನಪಟ್ಟ ಕಾದಂಬರಿ " ಬಾಡಿದ ಸುಂದರ ಹೂಗಳು". ಅದನ್ನು ಈಗಿನ ಕಾಲಕ್ಕೆ ತಕ್ಕಂತೆ ಕಥೆಯಲ್ಲಿ ಮಾತುಗಳನ್ನ ಸೇರಿಸಿ ಕಾದಂಬರಿಯನ್ನ ಬಿಡುಗಡೆ ಮಾಡುತ್ತಿದ್ದಾರೆ. ಬಹಳ ಜನರಿಗೆ ಈ ಕಾದಂಬರಿ ತಲುಪಲಿ ಎಂಬುದೇ ಇವರ ಆಶಯ.

About book : ಮುನ್ನುಡಿ " ಬಾಡಿದ ಸುಂದರ ಹೂಗಳು" ಈ ಶೀರ್ಷಿಕೆಯ ಲೇಖನದ ಬಗ್ಗೆ ಹೇಳಬೇಕೆಂದರೆ " ಮಾನಸ ವೀಣಾ " ರವರ ಮೊದಲ ಕೄತಿ. 23 ಅಧ್ಯಾಯಗಳು ಸರಳ ಸಂಭಾಷಣೆ ಮತ್ತು ಹೆಣ್ಣುಮಕ್ಕಳು ಶೋಷಣೆಗೆ ಒಳಗಾಗಿ ಸುಂದರತೆಯನ್ನು ಕಳೆದುಕೊಂಡ ಹೂಗಳಾಗಿರುತ್ತಾರೆ. ಈ ಕಥೆಯಲ್ಲಿ ಬರುವ ನಾಲ್ಕು ಸುಂದರ ಹೂಗಳು , ಸರಾಯು ತನ್ನ ಪ್ರೀತಿಗೆ ಬೆಲೆ ಇರದವನನ್ನು ಮನಸಾರೆ ಪ್ರೀತಿಸಿ ತಿರಸ್ಕೄತಳಾಗುತ್ತಾಳೆ. ಮಿನಲ್ ತನ್ನ ಪ್ರಿಯತಮನಿಗಾಗಿ ತನ್ನೇಲ್ಲಾ ಹೆಣ್ತನವನ್ನೆಲ್ಲಾ ಧಾರೆ ಎರೆದು ಕೊಟ್ಟು ಮನೋಹರನ ಹೆಂಡತಿಯ ಸ್ಧಾನ ಪಡೆಯಲಾಗದೆ ಅವನ ಜೊತೆಯಲ್ಲೆ ಜೀವನ ಪೂರ್ತಿ ಇರಲು ಒಪ್ಪುತ್ತಾಳೆ. ಇನ್ನು ಪವಿತ್ರ ಸೋದರ ಮಾವನ ಕಾಮ ಪಿಪಾಸೆಗೆ ಸಿಲುಕಿ ಒಂದು ಹೆಣ್ಣುಮಗುವಿನ ತಾಯಿಯಾಗಿ ಗಂಡನಿಲ್ಲದ ಚಿಕ್ಕಮ್ಮನ ಮನೆ ಸೇರುತ್ತಾಳೆ. ಹಂಸ ಗೆಳತಿಗೆ ಸಹಾಯ ಮಾಡುತ್ತಾ ಪವಿತ್ರಳ ಜೀವನದುದ್ದಕ್ಕೂ ಸಹಾಯ ಮಾಡುತ್ತಾ ತನ್ನ ಮನೆಯವರನ್ನೇಲ್ಲ ಒಂದು ದಡ ಸೇರಿಸಲು ಶ್ರಮಪಟ್ಟು ಅಂತ್ಯದ ಜೀವನಕ್ಕೆ ಸಂಗಾತಿಯನ್ನು ಹುಡುಕಿ ಎರಡನೆ ಹೆಂಡತಿಯಾಗಿ ತಾಯಿ, ತಮ್ಮನ ಜೊತೆ ಇರುತ್ತಾಳೆ. ಈ ರೀತಿಯ ಎಲ್ಲಾ ಕಷ್ಟಗಳನ್ನು ಹೆಣ್ಣುಮಕ್ಕಳು ಮಾತ್ರ ಅನುಭವಿಸಿ " ಬಾಡಿದ ಸುಂದರ ಹೂಗಳಾಗಿ " ಜೀವನ ಇಡೀ ತ್ಯಾಗದಲ್ಲೆ ಕಳೆಯುತ್ತಾರೆ. ನನ್ನ ಸ್ವಂತ ಅಭಿಪ್ರಾಯ ಒಬ್ಬ ಗಂಡಸಿಗಾದ್ರು ಶಿಕ್ಷೆಯಾಗಬೇಕಿತ್ತು. ಮಾನಸ ವೀಣಾ ರವರು ತಮ್ಮ ಲೇಖನ ಮುಂದುವರಿಸಲಿ ಶೋಷಣೆಗೆ ಒಳಗಾದ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಿಸಿ ಕೊಡಲಿ. ನಿಮ್ಮ ಪ್ರೀತಿಯ ಗೆಳತಿ ಮಣಿ . ಆರ್ . ರಾವ್ ಸಾಹಿತಿ , ಲೇಖಕಿ

Customer Reviews


 

Book from same catalogue